ವಿಷಗಾಳಿಗೆ ನಲುಗಿದ ದೆಹಲಿ-ನೋಯ್ಡಾ: ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ, ‘ಆರೆಂಜ್ ಅಲರ್ಟ್’ ಜಾರಿ

ದೆಹಲಿ-ನೋಯ್ಡಾ: ದೇಶದ ರಾಜಧಾನಿ ದೆಹಲಿ ಅಕ್ಷರಶಃ ನಲುಗಿ ಹೋಗಿದೆ. ವಿಷಗಾಳಿ, ಮೈಕೊರೆಯುವ ಚಳಿಗೆ ದಿಲ್ಲಿ ಜನತೆ ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ. ದಿನಕಳೆದಂತೆ ಸುಧಾರಿಸಬೇಕಿದ್ದ ವಾತಾವರಣ ಮತ್ತಷ್ಟು ಹದಗೆಡುತ್ತಿದೆ. ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಮಟ್ಟಕ್ಕೆ ಕುಸಿದಿದೆ, ಇದು ದಿಲ್ಲಿಯ ಜನತೆಯಲ್ಲಿ ದಿಗಿಲು ಹುಟ್ಟುವಂತೆ ಮಾಡಿದೆ.

ದೆಹಲಿ-ಎನ್‌ಸಿಆರ್ ವ್ಯಾಪ್ತಿಯಲ್ಲಿ ಕಂಡುಬಂದ ದಟ್ಟ ಮಂಜಿನ ಹೊದಿಕೆ ಜನಜೀವನವನ್ನು ಸಂಪೂರ್ಣವಾಗಿ ಸ್ತಬ್ದಗೊಳಿಸಿದೆ. ಕಣ್ಣೆದುರಿಗಿನ ರಸ್ತೆಯೇ ಕಾಣದಷ್ಟು ದಟ್ಟವಾಗಿ ಹರಡಿರುವ ಮಂಜು, ಅತ್ತ ಉಸಿರುಗಟ್ಟಿಸುವ ವಾಯು ಮಾಲಿನ್ಯದ ಭೀತಿ – ಇವೆರಡರ ನಡುವೆ ರಾಜಧಾನಿಯ ಜನ ಹೈರಾಣಾಗಿದ್ದಾರೆ. ನೋಯ್ಡಾದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿಮಾನಗಳ ಹಾರಾಟದಲ್ಲಿ ಏರುಪೇರಾಗಿದೆ, ರೈಲುಗಳು ತಡವಾಗಿ ಸಂಚರಿಸುತ್ತಿವೆ. ಅಲ್ಲದೇ ಹವಾಮಾನ ಇಲಾಖೆ ಎಚ್ಚರಿಕೆಯನ್ನು ಕೊಟ್ಟಿದ್ದು ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ.

ಹಾಗಾದ್ರೆ ಅಸಲಿಗೆ ದೆಹಲಿಯಲ್ಲಿ ಏನಾಗುತ್ತಿದೆ? ಪರಿಸ್ಥಿತಿ ಎಷ್ಟು ಗಂಭೀರವಾಗಿದೆ?, ಎಲ್ಲೆಲ್ಲಿ ಶಾಲಾ-ಕಾಲೇಜ್‌ಗೆ ರಜೆ ನೋಡೋಣ ಬನ್ನಿ.. ಹೌದು.. ದೆಹಲಿ ಈಗ ವಿಷಗಾಳಿಯಿಂದ ತುಂಬಿ ಹೋಗಿದೆ. ಜನರು ಉಸಿರುಗಟ್ಟಿ ಬದುಕುತ್ತಿದ್ದಾರೆ, ವಿಷಗಾಳಿ ಸೇವನೆಯಿಂದ ಜನರು ದಿನ ನಿತ್ಯ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಹೌದು.. ಸೋಮವಾರ ಬೆಳಿಗ್ಗೆ ದೆಹಲಿಯ ಜನ ಕಣ್ಣು ಬಿಟ್ಟಾಗ ಕಂಡಿದ್ದು ಬಿಳಿ ಬಣ್ಣದ ದಟ್ಟ ಮಂಜಿನ ಮಸುಕು ಮಾತ್ರ. ಇಂಡಿಯಾ ಗೇಟ್‌ನಿಂದ ಹಿಡಿದು ಯಮುನಾ ಎಕ್ಸ್‌ಪ್ರೆಸ್‌ವೇ ವರೆಗೆ ಎಲ್ಲೆಡೆ ಮಂಜು ಕವಿದಿತ್ತು.

ಭಾರತೀಯ ಹವಾಮಾನ ಇಲಾಖೆ (IMD) ಈಗಾಗಲೇ ದೆಹಲಿಗೆ ‘ಆರೆಂಜ್ ಅಲರ್ಟ್’ ಘೋಷಿಸಿದೆ. ಮಂಜು ಎಷ್ಟರಮಟ್ಟಿಗೆ ದಟ್ಟವಾಗಿತ್ತೆಂದರೆ, ಕೆಲವು ಪ್ರದೇಶಗಳಲ್ಲಿ ವಿಸಿಬಿಲಿಟಿ ‘ಶೂನ್ಯ’ಕ್ಕೆ ಇಳಿದಿದೆ. ವಾಹನ ಸವಾರರಿಗೆ ಹಗಲು ಹೊತ್ತಿನಲ್ಲೇ ರಸ್ತೆಗಳು ಕಾಣದಂತಾಗಿದೆ. ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇ ಮತ್ತು ಯಮುನಾ ಎಕ್ಸ್‌ಪ್ರೆಸ್‌ವೇಗಳಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ವಿಳಂಬಗೊಂಡಿದೆ. ಚಾಲಕರಿಗೆ ರಸ್ತೆಯ ತಿರುವುಗಳೂ ಕಾಣದಷ್ಟು ಮಂಜು ಕವಿದಿರುವುದು ಅಪಘಾತಗಳ ಭೀತಿಯನ್ನು ಹೆಚ್ಚಿಸಿದೆ.

  • Related Posts

    ನವದೆಹಲಿಯಲ್ಲಿ ನಿತಿನ್ ಗಡ್ಕರಿ ಭೇಟಿ: ಧಾರವಾಡ ಕ್ಷೇತ್ರದ ರಸ್ತೆ ಅಭಿವೃದ್ಧಿ ಕುರಿತು ಪ್ರಲ್ಹಾದ್ ಜೋಶಿ ಚರ್ಚೆ

    ನವದೆಹಲಿ: ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಪ್ರಮುಖ ಮಾತುಕತೆ ನಡೆಸಿದರು.…

    Continue reading
    ರಾಜ್ಯ ಪಿಯುಸಿ ಇತಿಹಾಸದಲ್ಲೇ ಹೊಸ ದಾಖಲೆ: 86.48% ಅಭೂತಪೂರ್ವ ಫಲಿತಾಂಶ

    ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಕಟಿಸಿರುವ ದ್ವಿತೀಯ ಪಿಯುಸಿ ಫಲಿತಾಂಶವು ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ಬಾರಿ ದಾಖಲೆಯ 86.48% ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಕರ್ನಾಟಕದ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಅಭೂತಪೂರ್ವ ಯಶಸ್ಸು…

    Continue reading

    Leave a Reply

    Your email address will not be published. Required fields are marked *