ನಂಜನಗೂಡು: “ನಾನು ಇಂದು ಒಬ್ಬ ಶಾಸಕನಾಗಿ, ವಕೀಲನಾಗಿ ಇಲ್ಲಿ ಮಾತನಾಡುತ್ತಿರುವುದಕ್ಕೆ ಮೂಲ ಸ್ಫೂರ್ತಿಯೇ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು. ಅವರ ಸಮಾನತೆಯ ಚಿಂತನೆಗಳು ಮತ್ತು ಹೋರಾಟದ ಹಾದಿ ನನ್ನ ಬದುಕಿಗೆ ಸದಾ ದಾರಿದೀಪ,” ಎಂದು ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಹೇಳಿದರು.
ನಂಜನಗೂಡು ನಗರದ ಶ್ರೀ ಶ್ರೀಕಂಠೇಶ್ವರ ದೇವಸ್ಥಾನದ ದಾಸೋಹ ಭವನದ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರ 135 ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬಾಬಾ ಸಾಹೇಬರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಶಾಸಕರ ಭಾಷಣದ ಪ್ರಮುಖಾಂಶಗಳು:
ಮಹಾನ್ ದಾರ್ಶನಿಕ: ಬಾಬಾ ಸಾಹೇಬರು ಕೇವಲ ಸಂವಿಧಾನ ಶಿಲ್ಪಿಯಲ್ಲ, ಅವರು ದೇಶಕ್ಕೆ ಸಮಾನತೆ, ಸ್ವಾತಂತ್ರ್ಯ ಮತ್ತು ಬಾಂಧವ್ಯದ ಮಹತ್ವವನ್ನು ಬೋಧಿಸಿದ ಮಹಾನ್ ದಾರ್ಶನಿಕರು.
ಶೋಷಿತರ ಧ್ವನಿ: ಸಮಾಜದಲ್ಲಿನ ಅಸಮಾನತೆಗಳ ವಿರುದ್ಧ ಅಚಲ ಹೋರಾಟ ನಡೆಸಿ, ಬಡವರ ಮತ್ತು ಶೋಷಿತ ವರ್ಗದವರಿಗೆ ಸಾಂವಿಧಾನಿಕ ಹಕ್ಕುಗಳನ್ನು ಕೊಡಿಸುವ ಮೂಲಕ ಅವರ ಧ್ವನಿಯಾಗಿ ನಿಂತವರು.
ಮಹಿಳಾ ಹಕ್ಕುಗಳ ರಕ್ಷಕ: ಮಹಿಳೆಯರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಿದ ಅವರ ಜೀವನ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ಅವರ ಆದರ್ಶಗಳನ್ನು ಪಾಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ತಹಸೀಲ್ದಾರ್ ಸ್ಮಿತಾ ರಾಮ್, DYSP ರಘು, ನಗರಸಭಾ ಪೌರಯುಕ್ತ ಬಸವರಾಜ್, EO ಜೆರಾಲ್ಡ್ ರಾಜೇಶ್. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಮಾರುತಿ, ಮುಖ್ಯ ಭಾಷಣಕಾರ ಸೋಮಶೇಖರ್, ನಗರ ಬ್ಲಾಕ್ ಅಧ್ಯಕ್ಷ ಸಿ.ಎಂ ಶಂಕರ್. ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ರಾಜ್, ಮುಖಂಡರಾದ ಶಶಿ ರೇಖಾ, ಪುಷ್ಪ ನಾಗೇಶ್ ರಾಜ್, ರವಿ, ಬಸವರಾಜ್, ಜೈ ರಾಮ್, ಶಿವಣ್ಣ, ಹಲ್ಲರೆ ಮಹದೇವು, ರಾಜೇಶ್, ಮಲ್ಲಹಳ್ಳಿ ನಾರಾಯಣ್.
ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಂಘಟನೆಗಳ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಬಾಬಾ ಸಾಹೇಬರಿಗೆ ಗೌರವ ನಮನ ಸಲ್ಲಿಸಿದರು.






