ಮಂಡ್ಯ: ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಪೂರಕವಾಗಿ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ನಿರ್ದೇಶನದಂತೆ ಪಾಂಡವಪುರ ಮತ್ತು ಮಂಡ್ಯ ತಾಲೂಕಿನ ಗಡಿಭಾಗದಲ್ಲಿ ನೂತನ ಕಾರ್ಖಾನೆ ನಿರ್ಮಾಣಕ್ಕೆ ಸಿದ್ಧತೆಗಳು ಆರಂಭವಾಗಿವೆ.
ಸ್ಥಳ ಪರಿಶೀಲನೆ ಮತ್ತು ರೈತರೊಂದಿಗೆ ಸಂವಾದ
ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು ಹಾಗೂ ಡಿ.ಸಿ. ತಮ್ಮಣ್ಣ ಅವರು ಜಂಟಿಯಾಗಿ ಪಾಂಡವಪುರ-ಮಂಡ್ಯ ತಾಲ್ಲೂಕುಗಳ ಅಗಟಹಳ್ಳಿ – ಎಲೆಚಾಕನಹಳ್ಳಿ ಗ್ರಾಮಗಳ ಸಮೀಪದಲ್ಲಿ ಕಾರ್ಖಾನೆ ನಿರ್ಮಾಣಕ್ಕೆ ಉದ್ದೇಶಿಸಿರುವ ಜಾಗವನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಭೂಮಿ ನೀಡುವ ರೈತರೊಂದಿಗೆ ಸುದೀರ್ಘ ಸಂವಾದ ನಡೆಸಲಾಯಿತು.
ರೈತರ ಸಕಾರಾತ್ಮಕ ಸ್ಪಂದನೆ
ಕಾರ್ಖಾನೆ ನಿರ್ಮಾಣದಿಂದ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂಬ ಆಶಯದೊಂದಿಗೆ ರೈತರು ಈ ಯೋಜನೆಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. “ಕಾರ್ಖಾನೆ ನಿರ್ಮಾಣಕ್ಕೆ ನಾವು ಸಕಲ ರೀತಿಯಲ್ಲಿ ಸಹಕಾರ ನೀಡುತ್ತೇವೆ” ಎಂದು ರೈತರು ಈ ಸಂದರ್ಭದಲ್ಲಿ ನಾಯಕರಿಗೆ ಭರವಸೆ ನೀಡಿದರು.
ಈ ಮಹತ್ವದ ಭೇಟಿಯ ಸಂದರ್ಭದಲ್ಲಿ, ರಾಮಚಂದ್ರು, ಮಾಜಿ ಅಧ್ಯಕ್ಷರು, ಮನ್ ಮುಲ್ (Manmul). ಸ್ಥಳೀಯ ಮುಖಂಡರುಗಳು ಹಾಗೂ ಪ್ರಗತಿಪರ ರೈತರು. ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೇಂದ್ರ ಸಚಿವರ ಆಶಯದಂತೆ ಈ ಭಾಗದ ರೈತರ ಹಿತರಕ್ಷಣೆ ಕಾಪಾಡುತ್ತಲೇ, ಕೈಗಾರಿಕಾ ಪ್ರಗತಿಗೆ ವೇಗ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಿ.ಎಸ್. ಪುಟ್ಟರಾಜು ಅವರು ತಿಳಿಸಿದರು.







