ಬಾಗಲಕೋಟೆ: “ಎಲ್ಲರೊಂದಿಗೆ, ಎಲ್ಲರ ಅಭಿವೃದ್ಧಿ, ಎಲ್ಲರ ವಿಶ್ವಾಸ” ಎಂಬ ಧ್ಯೇಯವಾಕ್ಯದೊಂದಿಗೆ ಬಾಗಲಕೋಟೆ ಉಪಚುನಾವಣಾ ಕಣದಲ್ಲಿ ಬಿಜೆಪಿ ಭರ್ಜರಿ ಪ್ರಚಾರ ನಡೆಸುತ್ತಿದೆ. ಇದರ ಭಾಗವಾಗಿ ಇಂದು ಕುರುಬ ಸಮಾಜದ ಮುಖಂಡರು ಹಾಗೂ ಪ್ರಮುಖ ಕಾರ್ಯಕರ್ತರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ವಿಶೇಷ ಸಮಾಲೋಚನಾ ಸಭೆ ನಡೆಸಿದರು.
ಸಭೆಯಲ್ಲಿ ಕುರುಬ ಸಮಾಜದ ಹಿತರಕ್ಷಣೆ, ಹಾಲಮತ ಸಂಸ್ಕೃತಿಯ ಉಳಿವಿಗೆ ಬಿಜೆಪಿಯ ಬದ್ಧತೆ ಹಾಗೂ ಶ್ರಮಜೀವಿಗಳ ಏಳಿಗೆಗಾಗಿ ಪಕ್ಷ ಕೈಗೊಂಡಿರುವ ಯೋಜನೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.
ಸಮಾಜದ ಹಿತರಕ್ಷಣೆಗೆ ಬಿಜೆಪಿಯ ಬದ್ಧತೆ:
ಸಭೆಯನ್ನುದ್ದೇಶಿಸಿ ಮಾತನಾಡಿದ ಬಿ.ವೈ. ವಿಜಯೇಂದ್ರ ಅವರು, “ಶೋಷಿತರ ಏಳಿಗೆಯ ಧ್ವನಿಯಾಗಿ ಮತ್ತು ಶ್ರಮಜೀವಿಗಳ ಹಿತರಕ್ಷಣೆಯಲ್ಲಿ ಬಿಜೆಪಿಯ ಸಾಧನೆಗಳು ಸಮಾಜಕ್ಕೆ ತಿಳಿದಿದೆ. ಬಾಗಲಕೋಟೆಯ ವಿಕಾಸ ಹಾಗೂ ಪರಿವರ್ತನೆಯ ದೃಢಸಂಕಲ್ಪಕ್ಕೆ ಕುರುಬ ಸಮಾಜವು ದೊಡ್ಡ ಶಕ್ತಿಯಾಗಿ ನಿಲ್ಲಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನು ಬೆಂಬಲಿಸುವ ಮೂಲಕ ಅಭಿವೃದ್ಧಿಗೆ ಶಕ್ತಿ ತುಂಬಬೇಕು ಎಂದು ಅವರು ಮನವಿ ಮಾಡಿದರು.
ಸಭೆಯಲ್ಲಿ ಪಾಲ್ಗೊಂಡ ಗಣ್ಯರು:
ಸಭೆಯಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರಮುಖ ನಾಯಕರು ಮತ್ತು ಸಮಾಜದ ಹಿರಿಯರು ಭಾಗವಹಿಸಿದ್ದರು:
ಹಿರಿಯ ನಾಯಕರು: ಸಂಸದರಾದ ಗೋವಿಂದ ಕಾರಜೋಳ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ.
ಸಮಾಜದ ಮುಖಂಡರು: ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಡಿ. ಬಿ. ಸಿದ್ದಾಪುರ.
ಶಾಸಕರು ಮತ್ತು ಉಸ್ತುವಾರಿಗಳು: ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್, ಶಾಸಕರುಗಳಾದ ಶೈಲೇಂದ್ರ ಬೆಲ್ದಾಳೆ, ಶ್ರೀ ಶಿವರಾಜ್ ಪಾಟೀಲ್, ಬಸವರಾಜ ಮತ್ತಿಮೂಡ್, ಹನುಮಂತ ನಿರಾಣಿ.
ಪ್ರಮುಖ ನಾಯಕರು: ಚುನಾವಣಾ ಉಸ್ತುವಾರಿ ಅರುಣ ಶಹಾಪುರ, ಮಾಜಿ ಶಾಸಕ ರಾಜುಗೌಡ ನಾಯಕ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಹಾಗೂ ಮುಖಂಡರಾದ ಜಿ. ಎಸ್. ಪಾಟೀಲ್, ಡಾ. ದೇವರಾಜ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







