ರಾಮನಗರ: ಜಿಲ್ಲೆಯ ಕಸಬಾ ಹೋಬಳಿಯ ಚಿಕ್ಕೇಗೌಡನದೊಡ್ಡಿ ಗ್ರಾಮದಲ್ಲಿ ಇಂದು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಯೋಜನೆಯಡಿ ಭೂಮಿ ಕಳೆದುಕೊಂಡ ರೈತರನ್ನು ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಿದರು.
ಅಹವಾಲು ಸ್ವೀಕಾರ: ಭೂಸ್ವಾಧೀನ ಪ್ರಕ್ರಿಯೆಯಿಂದ ಸಂಕಷ್ಟಕ್ಕೀಡಾಗಿರುವ ರೈತರ ಅಳಲನ್ನು ಆಲಿಸಿದ ನಿಖಿಲ್ ಅವರು, ರೈತರ ಪ್ರತಿಯೊಂದು ಮನವಿಗೂ ಪೂರಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು.
ದೆಹಲಿ ಚಲೋ – 40 ಸದಸ್ಯರ ನಿಯೋಗ: ಪರಿಹಾರದ ವಿಳಂಬವನ್ನು ತಪ್ಪಿಸಲು ತಕ್ಷಣವೇ 40 ಸದಸ್ಯರ ರೈತ ನಿಯೋಗವನ್ನು ರಚಿಸಲಾಗುವುದು. ಈ ನಿಯೋಗದೊಂದಿಗೆ ದೆಹಲಿಗೆ ತೆರಳಿ, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಖುದ್ದಾಗಿ ಭೇಟಿ ಮಾಡಿಸಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಪರಿಹಾರಕ್ಕೆ ಪ್ರಾಮಾಣಿಕ ಯತ್ನ: ಕೇಂದ್ರ ಸರ್ಕಾರದಿಂದ ಬರಬೇಕಾದ ಭೂಸ್ವಾಧೀನದ ಪರಿಹಾರದ ಹಣವನ್ನು ಶೀಘ್ರವಾಗಿ ರೈತರ ಕೈ ಸೇರುವಂತೆ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಅವರು ಈ ಸಂದರ್ಭದಲ್ಲಿ ವಾಗ್ದಾನ ಮಾಡಿದರು.
ಉಪಸ್ಥಿತರಿದ್ದ ಗಣ್ಯರು: ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷರಾದ ಶ್ರೀ ಸಬ್ಬಕೆರೆ ಶಿವಲಿಂಗಪ್ಪ, ಪ್ರಮುಖ ಮುಖಂಡರುಗಳಾದ ಶ್ರೀ ದೊರೆ, ಶ್ರೀ ಕೃಷ್ಣಮೂರ್ತಿ (ಕಿಟ್ಟಿ), ಶ್ರೀ ಚಂದ್ರಣ್ಣ, ಶ್ರೀ ಸಂತೋಷ್, ಶ್ರೀ ಮೂರ್ತಿ, ಶ್ರೀ ಮೋಹನ್, ಶ್ರೀ ರವಿ ಸೇರಿದಂತೆ ಹತ್ತಾರು ಸ್ಥಳೀಯ ಮುಖಂಡರು ಹಾಗೂ ನೂರಾರು ರೈತರು ಭಾಗವಹಿಸಿದ್ದರು.







