ಬೆಂಗಳೂರು ಕಂಪನಿಯಿಂದ ದೇಶದ ಮೊದಲ ಎಐ ಆಧಾರಿತ ಆಟೋಪೈಲಟ್ ಕಾರು ಅಭಿವೃದ್ಧಿ

ಬೆಂಗಳೂರು ಮೂಲದ ಮೈನಸ್ ಝೀರೋ (Minus ಜಿರ್) ಎಂಬ ಸ್ಟಾರ್ಟಪ್ ಕಂಪನಿಯು ದೇಶದ ಮೊದಲ AI ಆಧಾರಿತ ಸ್ವಯಂಚಾಲಿತ ಕಾರನ್ನು ಅಭಿವೃದ್ಧಿಪಡಿಸಿದೆ. ಸಾಮಾನ್ಯ ವಾಹನಗಳನ್ನು ಚಲಾಯಿಸುವುದೇ ಸವಾಲಾಗಿರುವ ಬೆಂಗಳೂರಿನಲ್ಲಿ ಭಾರತದ ಮೊದಲ ಆಟೋಪೈಲಟ್ ವ್ಯವಸ್ಥೆಯ (Auto Pilot System) ಕಾರನ್ನು ಮೈನಸ್ ಝೀರೋ ತಂಡ ಪರೀಕ್ಷಿಸಿ ಯಶಸ್ವಿಯಾಗಿದೆ.

ಮೈನಸ್ ಝೀರೋ ಕಂಪನಿಯ ಸಹ ಸಂಸ್ಥಾಪಕ ಗುರುಸಿಮ್ರನ್ ಕಲ್ರಾ (Gursimran Kalra) ತಮ್ಮ ಎಕ್ಸ್ ಖಾತೆಯಲ್ಲಿ AI ಆಧಾರಿತ ಸ್ವಯಂಚಾಲಿತ ಕಾರಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 3 ನಿಮಿಷ 27 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಡಿವೈಡರ್ ಇಲ್ಲದೇ ಇರುವ ರಸ್ತೆಯಲ್ಲೂ ಸಹ ಮುಂದೆ ಇರುವ ವಾಹನ, ಎದುರುಗಡೆ ಇಂದ ಬರುವ ವಾಹನಗಳನ್ನು ಗುರುತಿಸಿವುದನ್ನು ಕಾಣಬಹುದು. ಎದುರಿಗಿರುವ ಕಾರು ಬ್ರೇಕ್ ಹಾಕಿ ವೇಗವನ್ನು ತಗ್ಗಿಸಿದಾಗ, ಈ ಕಾರ್ ಕೂಡ ತನ್ನ ಸ್ಪೀಡ್ ಕಡಿಮೆಗೊಳಿಸುತ್ತಾ ಮುಂದೆ ಸಾಗುತ್ತದೆ. ಅಕ್ಕಪಕ್ಕ ಬರುವ ವಾಹನಗಳನ್ನು ಕೂಡ ಗುರುತಿಸಿ ಕಾರು ಚಾಲನೆ ಆಗುತ್ತಿರುವುದನ್ನು ನೀವು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಹಸು, ಆಟೋಗಳು, ಗೂಡ್ಸ್ ವಾಹನ, ತಳ್ಳುವ ಗಾಡಿ, ಡೆಡ್ ಎಂಡ್ ರೋಡ್ ಹೀಗೆ ತನಗೆ ಎದುರಾದ ಎಲ್ಲಾ ಸವಾಲುಗಳನ್ನು ಈ ಸ್ವಯಂಚಾಲಿತ ಕಾರು ಯಶಸ್ವಿಯಾಗಿ ಎದುರಿಸಿದೆ. 

ಈಗಿರುವ ಸಾಂಪ್ರದಾಯಿಕ ಎಐ ವ್ಯವಸ್ಥೆಗಳಿಗಿಂತ ಭಿನ್ನವಾಗಿ, AI ಮಾದರಿಯನ್ನು ಮೈನಸ್ ಝೀರೋ ಅಭಿವೃದ್ಧಿಪಡಿಸಿದೆ. ಹೈ-ಡೆಫಿನೆಷನ್ ನಕ್ಷೆ ಅಥವಾ ಈಗಾಗಲೇ ಲಭ್ಯವಿರುವ ಡೇಟಾ ಸಹಾಯವಿಲ್ಲದೆ, ಸ್ವಯಂ-ಮೇಲ್ವಿಚಾರಣೆ ರೀತಿಯಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಅಳವಡಿಸಲಾಗಿದೆ. ಭಾರತದಲ್ಲಿ ಸದ್ಯ ADAS (Advanced driver-assistance system) ಲೆವೆಲ್ 1 ಮತ್ತು ಲೆವೆಲ್ 2 ಹಂತದಲ್ಲಿ ಮಾತ್ರ ಇದೆ. ಲೆವೆಲ್ 2+, ಲೆವೆಲ್ 2++ ಮತ್ತು ಲೆವೆಲ್ 3 ತಂತ್ರಜ್ಞಾನದತ್ತ ಮುಂದುವರಿಯಲು ಇದು ಸಕಾಲ ಏನು ಮೈನಸ್ ಝೀರೊ ಕಂಪನಿ ತಿಳಿಸಿದೆ.

  • Related Posts

    ಬಿಹಾರಕ್ಕೆ ಆಗಮಿಸಿದ ವಿಶ್ವದ ಅತಿದೊಡ್ಡ ಶಿವಲಿಂಗ: ಜನೆವರಿ 17 ರಂದು ವಿರಾಟ್ ರಾಮಾಯಣ ಮಂದಿರದಲ್ಲಿ ಪ್ರತಿಷ್ಠಾಪನೆ

    ಗೋಪಾಲಗಂಜ್/ಕೇಸರಿಯಾ: ಭಾರತದ ಧಾರ್ಮಿಕ ಭೂಪಟದಲ್ಲಿ ಬಿಹಾರ ರಾಜ್ಯವು ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಪೂರ್ವ ಚಂಪಾರಣ್ ಜಿಲ್ಲೆಯ ಕೇಸರಿಯಾದಲ್ಲಿ ನಿರ್ಮಾಣವಾಗುತ್ತಿರುವ ಭವ್ಯ **’ವಿರಾಟ್ ರಾಮಾಯಣ ಮಂದಿರ’**ಕ್ಕೆ ವಿಶ್ವದ ಅತಿದೊಡ್ಡ ಶಿವಲಿಂಗವು ಯಶಸ್ವಿಯಾಗಿ ಆಗಮಿಸಿದೆ. ಶಿವಲಿಂಗದ ವಿಶೇಷತೆಗಳು: ಬೃಹತ್ ಗಾತ್ರ: ಈ ಶಿವಲಿಂಗವು…

    Continue reading
    ವನ್ಯಜೀವಿ ಸಫಾರಿ ನಿರ್ಬಂಧ ಪುನರ್ ಪರಿಶೀಲನೆ: ತಾಂತ್ರಿಕ ಸಮಿತಿ ರಚಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

    ಬೆಂಗಳೂರು: ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಸಫಾರಿ ನಿರ್ಬಂಧಿಸಿರುವ ನಿರ್ಧಾರವನ್ನು ಪುನರ್ ಪರಿಶೀಲಿಸಲು ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ವರದಿ ನೀಡಲು ಪರಿಣಿತರನ್ನೊಳಗೊಂಡ ತಾಂತ್ರಿಕ ಸಮಿತಿಯನ್ನು ರಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.Contentsಸ್ಥಳೀಯರ ಜೀವನೋಪಾಯಕ್ಕೆ ಆದ್ಯತೆಹಿನ್ನೆಲೆ ಮತ್ತು ತೀರ್ಮಾನಗಳು…

    Continue reading

    Leave a Reply

    Your email address will not be published. Required fields are marked *