ಬಜೆಟ್ 2026-27: ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಿದ್ಧತೆಗಳ ಕುರಿತು ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಸಭೆ

ಬೆಂಗಳೂರು: 2026-27ನೇ ಸಾಲಿನ ರಾಜ್ಯ ಆಯವ್ಯಯದ (Budget) ಹಿನ್ನೆಲೆಯಲ್ಲಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಬೇಕಾದ ಹೊಸ ಯೋಜನೆಗಳು ಹಾಗೂ ಆದ್ಯತೆಗಳ ಕುರಿತು ಮಾನ್ಯ ಸಚಿವರಾದ ಡಾ. ಶರಣ ಪ್ರಕಾಶ ಆರ್‌ ಪಾಟೀಲ್‌ ಅವರು ಇಂದು ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.

ಬಜೆಟ್‌ನಲ್ಲಿ ಇಲಾಖೆಗೆ ನಿಗದಿಪಡಿಸಬೇಕಾದ ಅನುದಾನ, ಯುವಜನರಿಗೆ ಉದ್ಯೋಗಾವಕಾಶ ಒದಗಿಸುವ ಹೊಸ ಕಾರ್ಯಕ್ರಮಗಳು ಮತ್ತು ಗ್ರಾಮೀಣ ಜೀವನೋಪಾಯವನ್ನು ಬಲಪಡಿಸುವ ದೃಷ್ಟಿಯಿಂದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.

ಉದ್ಯೋಗಾಧಾರಿತ ಕೌಶಲ್ಯ: ರಾಜ್ಯದ ಯುವಜನರಿಗೆ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ತಾಂತ್ರಿಕ ಕೌಶಲ್ಯ ತರಬೇತಿ ನೀಡಿ, ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಹೊಸ ಯೋಜನೆಗಳ ರೂಪರೇಷೆ ಸಿದ್ಧಪಡಿಸಲಾಯಿತು.

ಜೀವನೋಪಾಯ ಅಭಿವೃದ್ಧಿ: ಸ್ತ್ರೀಶಕ್ತಿ ಸಂಘಗಳು ಮತ್ತು ಗ್ರಾಮೀಣ ಉದ್ದಿಮೆದಾರರಿಗೆ ಜೀವನೋಪಾಯ ಒದಗಿಸುವ ಹಾಗೂ ಸಣ್ಣ ಪ್ರಮಾಣದ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವ ಕುರಿತು ಚರ್ಚಿಸಲಾಯಿತು.

ಅನುದಾನ ಬಳಕೆ: ಪ್ರಸಕ್ತ ಸಾಲಿನ ಅನುದಾನದ ಬಳಕೆ ಹಾಗೂ ಮುಂಬರುವ ಸಾಲಿನಲ್ಲಿ ಅಗತ್ಯವಿರುವ ಹಣಕಾಸು ನೆರವಿನ ಬಗ್ಗೆ ಸಮಗ್ರ ಪರಾಮರ್ಶೆ ನಡೆಸಲಾಯಿತು.

ಮನೋಜ್‌ ಕುಮಾರ್‌ ಮೀನಾ, ಸರ್ಕಾರದ ಕಾರ್ಯದರ್ಶಿಗಳು. ಶ್ರೀಮತಿ ಸ್ನೇಹಲ್‌ ಆರ್‌, ಮಾನ್ಯ ಅಭಿಯಾನ ನಿರ್ದೇಶಕರು. ಶ್ರೀಮತಿ ಅನ್ನಪೂರ್ಣ ಕೆ, ಮುಖ್ಯ ಕಾರ್ಯಾಚರಣಾ ಅಧಿಕಾರಿಗಳು (ಕಾ). ಶ್ರೀಮತಿ ಕಾತ್ಯಾಯಿನಿದೇವಿ, ಮುಖ್ಯ ಕಾರ್ಯಾಚರಣಾ ಅಧಿಕಾರಿಗಳು (ಕೌ). ಶ್ರೀನಿವಾಸ್‌ ಎಂ, ಅಪರ ಅಭಿಯಾನ ನಿರ್ದೇಶಕರು. ಶ್ರೀಮತಿ ರಾಗವಿ ವಿ ನಾಯಕ, ಯೋಜನಾಧಿಕಾರಿಗಳು ಹಾಗೂ ಇಲಾಖೆಯ ಇತರ ಪ್ರಮುಖ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಬಜೆಟ್‌ನಲ್ಲಿ ಯುವಜನತೆ ಮತ್ತು ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ರಾಜ್ಯದ ಆರ್ಥಿಕತೆಗೆ ಬಲ ತುಂಬಲು ಇಲಾಖೆ ಸರ್ವಸನ್ನದ್ಧವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.

  • Related Posts

    ದಲಿತ ಉದ್ದಿಮೆದಾರರ ಸ್ಫೂರ್ತಿ ಸಿಜಿ ಶ್ರೀನಿವಾಸನ್ ಅವರಿಗೆ ಅಭಿನಂದನೆ: ಬೆಂಗಳೂರಿನಲ್ಲಿ ಗಣ್ಯರ ಸಮಾಗಮ

    ಬೆಂಗಳೂರು: ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದ ಮೂಲಕ ಉದ್ಯಮ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿರುವ ದಲಿತ ಉದ್ದಿಮೆದಾರ ಸಿಜಿ ಶ್ರೀನಿವಾಸನ್ ಅವರ ಸಾಧನೆಯನ್ನು ಗೌರವಿಸುವ ಸಲುವಾಗಿ ಇಂದು ನಗರದ ವಸಂತನಗರದಲ್ಲಿ ವಿಶೇಷ ‘ಅಭಿನಂದನಾ ಸಮಾರಂಭ’ವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದಲ್ಲಿ ಮಾನ್ಯ ಸಂಸದರಾದ…

    Continue reading
    ಗುಂಡ್ಲುಪೇಟೆಯಲ್ಲಿ ಸಿಎಂ ಕಾರ್ಯಕ್ರಮದ ಅಬ್ಬರ: ₹475 ಕೋಟಿ ಯೋಜನೆಗಳ ಲೋಕಾರ್ಪಣೆಗೆ ಸಜ್ಜು

    ಚಾಮರಾಜನಗರ: ಏಪ್ರಿಲ್ 21 ರಂದು ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆಯಲಿರುವ ಮಾನ್ಯ ಮುಖ್ಯಮಂತ್ರಿಗಳ ಬೃಹತ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ಸುಮಾರು 475 ಕೋಟಿ ರೂ. ವೆಚ್ಚದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ…

    Continue reading

    Leave a Reply

    Your email address will not be published. Required fields are marked *