ಮಂಗಳೂರು: ಕರಾವಳಿ ಕರ್ನಾಟಕದ ಪ್ರವಾಸೋದ್ಯಮ ಸಾಧ್ಯತೆಗಳನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಇಂದು ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ “ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ-2026″ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದ್ಧೂರಿಯಾಗಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾದ ಗಾಳಿಪಟ ಉತ್ಸವಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಿದರು. ಬಣ್ಣಬಣ್ಣದ ಗಾಳಿಪಟಗಳು ನೀಲ ಆಕಾಶದಲ್ಲಿ ರಂಗು ಚೆಲ್ಲುವ ಮೂಲಕ ಸಮಾವೇಶಕ್ಕೆ ಕಳೆ ನೀಡಿದವು.
ಪಿಲಿಕುಳ ರೆಸಾರ್ಟ್ ಲೋಕಾರ್ಪಣೆ
ಪ್ರವಾಸಿಗರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಅಭಿವೃದ್ಧಿಪಡಿಸಿರುವ ಸುಸಜ್ಜಿತ “ಪಿಲಿಕುಳ ರೆಸಾರ್ಟ್“ ಅನ್ನು ಮುಖ್ಯಮಂತ್ರಿಗಳು ಇದೇ ವೇಳೆ ಲೋಕಾರ್ಪಣೆಗೊಳಿಸಿದರು. ಪಿಲಿಕುಳ ನಿಸರ್ಗಧಾಮಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಈ ರೆಸಾರ್ಟ್ ಉತ್ತಮ ವಾಸ್ತವ್ಯದ ಅನುಭವ ನೀಡಲಿದೆ.
ಯು.ಟಿ. ಖಾದರ್: ಸಭಾಧ್ಯಕ್ಷರು, ವಿಧಾನಸಭೆ, ಡಿ.ಕೆ. ಶಿವಕುಮಾರ್: ಉಪ ಮುಖ್ಯಮಂತ್ರಿಗಳು, ಹೆಚ್.ಕೆ. ಪಾಟೀಲ್: ಪ್ರವಾಸೋದ್ಯಮ ಸಚಿವರು, ದಿನೇಶ್ ಗುಂಡೂರಾವ್: ಜಿಲ್ಲಾ ಉಸ್ತುವಾರಿ ಸಚಿವರು, ಲಕ್ಷ್ಮಿ ಹೆಬ್ಬಾಳ್ಕರ್: ಸಚಿವರು, ನಸೀರ್ ಅಹಮದ್: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಅಶೋಕ್ ರೈ: ಶಾಸಕರು, ಸಮಾವೇಶದಲ್ಲಿ ಜಿಲ್ಲೆಯ ವಿವಿಧ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದು, ಕರಾವಳಿ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚಿಸಿದರು.







